Harshika Poonacha Instagram – ಭುವನಂ ತಂಡದಿಂದ ಸವಸುದ್ದಿಯಲ್ಲಿ “ಉಷಾರ್” – “ಕರ್ನಾಟಕ ಕೊರೋನ ಜಾಗೃತಿ” ಅಭಿಯಾನ!!
ಭುವನಂ ಸಂಸ್ಥೆಯ ರಾಯಬಾರಿಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ರವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರಾಯಭಾಗದ, ಸವಸುದ್ದಿ ಗ್ರಾಮಕ್ಕೆ ಭೇಟಿ ನೀಡುವ ಮೂಲಕ ಉತ್ತರ ಕರ್ನಾಟಕದಲ್ಲಿ ಭುವನಂ ಸಂಸ್ಥೆಯ ಅಡಿಯಲ್ಲಿ ಆಯೋಜಿಸಲಾದ “ಉಷಾರ್” – “ಕರ್ನಾಟಕ ಕೊರೋನ ಜಾಗೃತಿ” ಅಭಿಯಾನವನ್ನು ಪ್ರಾರಂಭಿಸಿರುತ್ತಾರೆ.
ಸವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 70 – 80 ಸಾವು ಗಳಾಗಿರುವುದನ್ನು ಅರಿತು ಖುದ್ದಾಗಿ ಬೆಂಗಳೂರಿನಿಂದ 12 ಗಂಟೆಗಳ ಕಾಲ ಅವರ ತಂಡದೊಡನೆ ಪಯಣ ಬೆಳಸಿ ಇಲ್ಲಿಯ ಜನರನ್ನು ಭೇಟಿ ಮಾಡಿ ಅವರ ತೊಂದರೆಗಳನ್ನು ಆಲಿಸಿ, ಕೊರೊನ ಪೀಡಿತ 50 ಸಂಸಾರಗಳ ಮನೆಗೆ ತಾವೇ ತೆರಳಿ ಒಂದು ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳು ,ದಿನಸಿ, ಔಷದಿ ಮತ್ತು ಮಾಸ್ಕ್ ಗಳ್ಳನು ಎಲ್ಲಾ ಬಡ ಕುಟುಂಬಗಳಿಗೆ ಹಂಚಿದ್ದಾರೆ . | Posted on 09/Jun/2021 10:54:55



